ಅಭಿಪ್ರಾಯ / ಸಲಹೆಗಳು

ಪೌರರಕ್ಷಣೆ

ಪೌರರಕ್ಷಣೆ

ನಾಗರಿಕ ರಕ್ಷಣೆ ಎಲ್ಲರ ಜವಾಬ್ದಾರಿ. ಏಕೆಂದರೆ ನಾಗರಿಕರಿಂದಲೇ ನಾಗರಿಕರ ರಕ್ಷಣೆಯಾಗಬೇಕೆಂಬುದು ಇದರ ಮುಖ್ಯ ತತ್ವ. ನಿಮ್ಮ ನಗರದ, ನಿಮ್ಮ ನೆರೆ ಹೊರೆಯ, ನಿಮ್ಮ ಮನೆಯ ಹಾಗೂ ನಿಮ್ಮ ಸ್ವಂತದ ಸಂರಕ್ಷಣೆಯಲ್ಲಿ ನೀವು ವ್ಯಕ್ತಿಗತವಾಗಿ ಹಾಗೂ ಪೌರರಾಗಿ ವಹಿಸುವ ಪಾತ್ರ ಅತಿ ಮಹತ್ವವಾದದು.

ನಾಗರಿಕ ರಕ್ಷಣೆಯ ಕಾರ್ಯಾಚರಣೆಗೆ ಅತಿ ದೊಡ್ಡ ಪ್ರಮಾಣದ ಹಾಗೂ ನಿರಂತರದ ಮಾನವ ಸಂಖ್ಯಾಬಲ ಅಗತ್ಯವಾಗಿರುವುದರಿಂದ ಅದನ್ನು ಹಣ ನೀಡಿ ಪಡೆಯುವುದು ಸಾಧ್ಯವಲ್ಲ; ಮೂಲತಃ ಸ್ವಯಂಪ್ರೇರಿತವಾಗಿದ್ದಲ್ಲಿ ಮಾತ್ರ ಸಾಧ್ಯ.

ಪೌರರಕ್ಷಣಾ ಸಂಸ್ಥೆಯು ಗೃಹರಕ್ಷಕದಳದೊಟ್ಟಿಗೆ ಕಾರ್ಯ ನಿರ್ವಹಿಸುತ್ತಿರುವ ಒಂದು ಸ್ವತಂತ್ರ ಸ್ವಯಂ ಸೇವಾ ಸಂಸ್ಥೆಯಾಗಿದೆ. ಬಾಹ್ಯ ಆಕ್ರಮಣ ಮತ್ತು ಪ್ರಾಕೃತಿಕ ವಿಕೋಪಗಳ ಸಂದರ್ಭಗಳಲ್ಲಿ ಜನ ಸಾಮಾನ್ಯರ ಜೀವ ಮತ್ತು ಆಸ್ತಿ ಸುರಕ್ಷಣೆ ಮಾಡುವುದು ಈ ಸಂಸ್ಥೆಯು ಮುಖ್ಯ ಗುರಿಯಾಗಿದೆ. ಪೌರರಕ್ಷಣಾ ದಳವು ವಿವಿಧ ಪೌರರಕ್ಷಣಾ ಕ್ರಮಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತನ್ನ ಸೇವೆಯನ್ನು ಸಮುದಾಯಕ್ಕೆ ಒದಗಿಸಲು ನಾಗರಿಕರನ್ನು ಸ್ವಯಂ ಸೇವಕರನ್ನಾಗಿ ಭರ್ತಿ ಮಾಡಿಕೊಂಡು ಅವರಿಗೆ ಪೌರರಕ್ಷಣಾ ವಿಷಯಗಳಲ್ಲಿ ತರಬೇತಿಯನ್ನು ನೀಡುತ್ತಿದೆ. ಕೇಂದ್ರ ಸರ್ಕಾರವು ರಾಜ್ಯದಲ್ಲಿನ ಬೆಂಗಳೂರು ನಗರ, ಉತ್ತರಕನ್ನಡ ಜಿಲ್ಲೆಯ ಮಲ್ಲಾಪುರ ಹಾಗೂ ರಾಯಚೂರು ಜಿಲ್ಲೆಯ ಶಕ್ತಿನಗರವನ್ನು ಎರಡನೇ ದರ್ಜೆಯ ಪೌರರಕ್ಷಣಾ ಪಟ್ಟಣಗಳನ್ನಾಗಿ ಘೋಷಿಸಿ ಅದೇ ರೀತಿ ಮುಂದುವರೆಸಿರುತ್ತದೆ.

ಈ ಜಿಲ್ಲೆಗಳಲ್ಲಿ ಪೌರರಕ್ಷಣಾ ನಿಯಂತ್ರಕರನ್ನು ನೇಮಕ ಮಾಡಲಾಗಿದ್ದು, ಪೌರರಕ್ಷಣಾ Pಚಿಠಿeಡಿ ಠಿಟಚಿಟಿ ನ ಅನುಗುಣವಾಗಿ ಪೌರರಕ್ಷಣಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಈ ಇಲಾಖೆಗೆ ಡಿಜಿಪಿ ಶ್ರೇಣಿಯ ನಿರ್ದೇಶಕರು ಮುಖ್ಯಸ್ಥರಾಗಿರುತ್ತಾರೆ. ಗೃಹರಕ್ಷಕದಳದ ಮಹಾ ಸಮಾದೇಷ್ಟರೇ ಈ ಹುದ್ದೆಯನ್ನೂ ಪದನಿಮಿತ್ತ ಹೊಂದಿರುತ್ತಾರೆ.

ಐಜಿಪಿ ಶ್ರೇಣಿಯಲ್ಲಿ ಅಪರ ನಿರ್ದೇಶಕರು ಮತ್ತು ಆರಕ್ಷಕ ಅಧೀಕ್ಷಕರ ಶ್ರೇಣಿಯ ಉಪ ನಿರ್ದೇಶಕರು, ನಿರ್ದೇಶಕರ ಅಧೀನದಲ್ಲಿ ಪೌರರಕ್ಷಣಾ ಇಲಾಖೆಯ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಸಹಾಯಕರಾಗಿರುತ್ತಾರೆ. ಗೃಹರಕ್ಷಕದಳದ ಅಪರ ಮಹಾ ಸಮಾದೇಷ್ಟರು ಮತ್ತು ಉಪ ಮಹಾ ಸಮಾದೇಷ್ಟರುಗಳೇ ಅನುಕ್ರಮವಾಗಿ ಈ ಹುದ್ದೆಗಳನ್ನೂ ಪದನಿಮಿತ್ತ ಹೊಂದಿದ್ದು ಕಾರ್ಯ ನಿರ್ವಹಿಸುತ್ತಾರೆ.

ಇಲಾಖಾ ಮುಖ್ಯಸ್ಥರಿಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರು ಪೌರರಕ್ಷಣಾ ಕೇಂದ್ರ ಕಾರ್ಯ ಸ್ಥಾನದ ಸೇವೆಗಳ ನಿಯಂತ್ರಕರಾಗಿ ಸಹಾಯಕರಾಗಿರುತ್ತಾರೆ. ಹಾಗೆಯೇ ಉತ್ತರಕನ್ನಡ ಮತ್ತು ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಮಲ್ಲಾಪುರ ಮತ್ತು ಶಕ್ತಿನಗರ ಪೌರರಕ್ಷಣಾ ಪಟ್ಟಣಗಳ ನಿಯಂತ್ರಕರಾಗಿ ಸಹಾಯಕರಾಗಿರುತ್ತಾರೆ.

ಭಾರತ ಸರ್ಕಾರವು ರಚಿಸಿದ ಪೌರರಕ್ಷಣಾ ಕಾಯ್ದೆ 1968 ಮತ್ತು ಅದರ ಅಡಿಯಲ್ಲಿ ರೂಪಿಸಿದ ಪೌರರಕ್ಷಣಾ ನಿಯಮಗಳು 1968 ರ ಅನ್ವಯ ಪೌರರಕ್ಷಣಾ ಚಟುವಟಿಕೆಗಳನ್ನು ಜಾರಿಗೊಳಿಸಲಾಗುತ್ತಿದೆ. ಭಾರತ ಸರ್ಕಾರವು ಸಿಬ್ಬಂದಿ ಸಂಖ್ಯಾಬಲದ ಮಾದರಿಯ ಬಗ್ಗೆ ಹೊರಡಿಸಿರುವ ಆದೇಶಗಳನ್ನು ಕ್ರೋಢೀಕರಿಸಿ ಮಾಸ್ಟರ್ ಪ್ಲಾನ್ ಎಂಬ ಪುಸ್ತಕ ಪ್ರಕಟಪಡಿಸಿದೆ.

ಕೇಂದ್ರ ಸರ್ಕಾರದಿಂದ ಒದಗಿಸುವ ದನಸಹಾಯದ ಬಗ್ಗೆ ಹೊರಡಿಸಿರುವ ಆದೇಶಗಳನ್ನು ಕ್ರೋಢೀಕರಿಸಿ ಕಂಪೆಂಡಿಯಂ ಆಫ್ ಇನ್‍ಸ್ಟ್ರಕ್ಷನ್ಸ್ ಎಂದು ಹೆಸರಿಸಿ ಪುಸ್ತಕ ಪ್ರಕಟಗೊಳಿಸಿದೆ. ರಾಜ್ಯ ಸರ್ಕಾರಗಳು ತಮ್ಮ ರಾಜ್ಯದಲ್ಲಿರುವ ಪೌರರಕ್ಷಣಾ ದಳದ ನಗರಗಳಿಗೆ ಅನ್ವಯವಾಗುವ ವರ್ಗೀಕರಣದ ಆಧಾರದ ಮೇಲೆ ಒದಗಿಸಬೇಕಾದ ಸೇವೆಗಳ ಬಗ್ಗೆ ಪೌರರಕ್ಷಣಾ ದಳದ ಸಾಮಾನ್ಯ ಸೂತ್ರಗಳನ್ನು ಜನರಲ್ ಪ್ರಿನ್ಸಿಪಲ್ಸ್ ಆಫ್ ಸಿವಿಲ್ ಡಿಫೆನ್ಸ್ ಎಂದು ಹೆಸರಿಸಿ ಕ್ರೋಢೀಕೃತ ಮಾಹಿತಿಯ ಬಗ್ಗೆ ಪುಸ್ತಕ ಪ್ರಕಟಿಸಿದೆ.

ಮುನ್ನೋಟ (ಇಲಾಖೆಯ ಪ್ರಗತಿಯ ಬಗ್ಗೆ ಹೊಂದಿರುವ ಗುರಿ)

ಬೆಂಗಳೂರು ನಗರವನ್ನು ಪೌರರಕ್ಷಣಾ ವಾರ್ಡನ್ ಸೇವೆಗಳಿಗಾಗಿ 50 ಡಿವಿಜನ್‍ಗಳಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಡಿವಿಜನ್‍ಗೆ ಕನಿಷ್ಠ 122 ಪೌರರಕ್ಷಣಾ ಸ್ವಯಂ ಸೇವಕರನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಬೆಂಗಳೂರು ನಗರದಲ್ಲಿ ಒಟ್ಟು 10,000 ವಾರ್ಡ್‍ನ್ ಪೌರರಕ್ಷಣಾ ಸ್ವಯಂ ಸೇವಕರನ್ನು ಭರ್ತಿ ಮಾಡಿಕೊಳ್ಳುವ ಗುರಿ ಇಟ್ಟುಕೊಳ್ಳಲಾಗಿದೆ. ಸಧ್ಯದಲ್ಲಿ 7000 ಸ್ವಯಂ ಸೇವಕರನ್ನು ನೊಂದಾಯಿಸಿಕೊಳ್ಳಲಾಗಿದೆ. ಇದು ಇಲಾಖೆಗೆ ಇತರೆ ಎರಡನೇ ದರ್ಜೆ ಪೌರರಕ್ಷಣಾ ನಗರಗಳಿಗೆ ಒದಗಿಸಬೇಕಾದ ಪೌರರಕ್ಷಣಾ ಸೇವೆಗಳನ್ನು ಬೆಂಗಳೂರಿನಲ್ಲಿ ಚುರುಕುಗೊಳಿಸಲು ಸಾಧ್ಯವಾಗುವಂತೆ ಮಾಡಿದೆ. ವಾರ್ಡ್‍ನ್ ಸೇವೆಯನ್ನು ಒಳಗೊಂಡಂತೆ ಒದಗಿಸಬೇಕಾದ ಇತರ ಎಲ್ಲಾ ಸೇವೆಗಳಿಗೂ ಸೇರಿ ಒಟ್ಟು ಒಂದು ಲಕ್ಷ ಸ್ವಯಂ ಸೇವಕರನ್ನು ನೊಂದಾಯಿಸಿಕೊಳ್ಳುವ ಉದ್ದೇಶವಿರುತ್ತದೆ.

ನೊಂದಣಿಯಾಗಿರುವ ಪೌರರಕ್ಷಣಾ ವಾರ್ಡನ್‍ಗಳೂ ವಿವಿಧ ಪೌರರಕ್ಷಣಾ ಸೇವೆಗಳನ್ನು ಕಾರ್ಯಗತಗೊಳಿಸಲು ಸಮರ್ಥರಾಗುವಂತೆ ವಿವಿಧ ತರಬೇತಿಗಳನ್ನು ಪ್ರಸ್ತಾವಿಸಿದೆ. ಇಲಾಖೆಯ ಬೆಂಗಳೂರು ನಗರದ ವಿವಿಧ ಪ್ರಮುಖ ಸ್ಥಳಗಳನ್ನು ಗುರುತಿಸಿ ಮಾಲುಗಳು, ಚಿತ್ರಮಂದಿಗಳು, ಶಾಲೆಗಳು ಇತ್ಯಾದಿ ಜನ ನಿಬಿಡ ಸ್ಥಳಗಳಲ್ಲಿ ಜನ ಸಾಮಾನ್ಯರಲ್ಲಿ ಅರಿವು ಮೂಡಿಸಲು ಪ್ರಾತ್ಯಕ್ಷಿಕೆ ಹಾಗೂ ಅಣುಕು ಪ್ರದರ್ಶನಗಳನ್ನು ಏರ್ಪಡಿಸಿ ತಿಳುವಳಿಕೆ ಮೂಡಿಸಲು ಏರ್ಪಾಡು ಮಾಡುತ್ತಿದೆ. ಈಗಾಗಲೇ 100 ಅಣುಕು ಪ್ರದರ್ಶನ ಹಾಗೂ ಪ್ರಾತ್ಯಕ್ಷಿಕೆಗಳನ್ನು ಏರ್ಪಡಿಸಲಾಗಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಇನ್ನೂ 100 ಸ್ಥಳಗಳಲ್ಲಿ ಅಣುಕು ಪ್ರದರ್ಶನಗಳನ್ನು ಏರ್ಪಡಿಸಲು ಉದ್ದೇಶಿಸಿದ್ದು, ಇದು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಒಂದು ಲಕ್ಷ ಬೆಂಗಳೂರು ನಾಗರಿಕರಿಗೆ ಅರಿವು ಮೂಡಿಸಲು ಸಹಕಾರಿಯಾಗುತ್ತದೆ

ಇಲಾಖೆಯ ಉದ್ದೇಶಗಳು

ಪೌರರಕ್ಷಣಾ ಇಲಾಖೆಯ ಪ್ರಮುಖ ಉದ್ದೇಶವು ಜೀವಗಳನ್ನು ಉಳಿಸುವುದು, ಜನ ಸಾಮಾನ್ಯರ ಆಸ್ತಿ ಪಾಸ್ತಿಗಳಿಗೆ ಶತ್ರು ದಾಳಿಯಿಂದ, ಮಾನವ ನಿರ್ಮಿತ ಪ್ರಕೃತಿ ವಿಕೋಪಗಳಿಂದ ಉಂಟಾಗಬಹುದಾದ ಹಾನಿಯನ್ನು ಕಡಿಮೆಗೊಳಿಸುವುದು ಮತ್ತು ಉತ್ಪಾದನೆಯು ನಿರಂತರವಾಗಿರುವಂತೆ ಕಾಯ್ದುಕೊಳ್ಳುವುದಕ್ಕೆ ನಾಗರೀಕರಿಗೆ ಸಹಾಯ ಹಸ್ತ ನೀಡುವುದ್ದಾಗಿದೆ. ಪೌರರಕ್ಷಣಾ ಕ್ರಮಗಳು ಇಲಾಖೆಗಳು ನಿರ್ವಹಿಸುವ ಸಾಮಾನ್ಯ ಕರ್ತವ್ಯಗಳನ್ನು ತುರ್ತು ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ರೂಪಿಸುವ ವಿಸ್ತøತ ಭಾಗವಾಗಿರುತ್ತದೆ.

ಪೌರರಕ್ಷಣಾ ಕ್ರಮಗಳು ಕೆಳಕಂಡ ಸೇವೆಗಳನ್ನು ಒಳಗೊಂಡಿದೆ.

1) ತರಬೇತಿ ಹಾಗೂ ಮನವರಿಕೆ

2) ಸಮನ್ವಯಗೊಳಿಸುವುದು ಮತ್ತು ನಿಯಂತ್ರಣಕ್ಕೊಳಪಟ್ಟ ಎಚ್ಚರಿಕಾ ಕ್ರಮ

3) ಗಾಯಾಳುಗಳನ್ನು ರಕ್ಷಿಸುವುದು

4) ಪ್ರಥಮ ಚಿಕಿತ್ಸೆ

5) ಸುರಕ್ಷಿತಾ ಪ್ರದೇಶ/ಭಾಗಕ್ಕೆ ಸಾಗಿಸುವುದು, ನಿರಾಶ್ರಿತರಿಗೆ ಪುನರ್ ವಸತಿ ಅತ್ಯಾವಶ್ಯಕ ಸಾಮಗ್ರಿಗಳ ಶೇಖರಣೆ ಮತ್ತು ಹಂಚುವಿಕೆ

6) ಆಸ್ಪತ್ರೆಗಳನ್ನು ಮೀಸಲಿರಿಸುವುದು, ವೈದ್ಯರು ಮತ್ತು ದಾದಿಯರ ಸಿಬ್ಬಂದಿ ಒದಗಿಸುವುದು

7) ತುರ್ತು ಒಳಚರಂಡಿ ಮತ್ತು ಪರ್ಯಾಯ ನೀರು ಸರಬರಾಜು ವ್ಯವಸ್ಥೆ ಏರ್ಪಡಿಸುವುದು

8) ಸಾರಿಗೆ ವ್ಯವಸ್ಥೆ ಕ್ರೋಢೀಕರಿಸುವುದು

9) ಮನೆಗಳ ದುರಸ್ತಿ

10) ಬೆಳಕುಗಳ ನಿಯಂತ್ರಣ, ಸೂಕ್ಷ್ಮ ಸ್ಥಾವರಗಳನ್ನು ದಾಳಿಯಿಂದ ಕೃತ್ರಿಮಾಚ್ಛಾದನೆ ಮೂಲಕ ಬಚ್ಚಿಡುವುದು

11) ಬೆಳೆ ಬಾಳುವ ವಸ್ತುಗಳ ಸಂರಕ್ಷಣೆ

12) ಅತ್ಯಾವಶ್ಯಕ ಸೇವೆಗಳು ಮತ್ತು ಸೂಕ್ಷ್ಮ ಕೈಗಾರಿಕೆಗಳನ್ನು ರಕ್ಷಿಸಲು ವಿಶೇಷ ಕ್ರಮಗಳು

13) ಪ್ರಚಾರ ನೀಡುವುದು, ಸಾರ್ವಜನಿಕರ ಸಹಕಾರ ಪಡೆಯುವುದು

ಅಧಿನಿಯಮ, ನಿಯಮಗಳ ಹಾಗೂ ಅಧಿಸೂಚನೆ :-

ಪೌರರಕ್ಷಣಾ ಅಧಿನಿಯಮ – 1968

1. ಅದಿನಿಯಮದ ಹೆಸರು – ಪೌರರಕ್ಷಣಾ ಅದಿನಿಯಮ – 1968

2. ಕ್ಷೇತ್ರಾಧಿಕಾರ ವ್ಯಾಪ್ತಿ – ಭಾರತದ ಎಲ್ಲಾ ಪ್ರದೇಶಗಳು.

3. ಪರಿಭಾಷೆ – ರಕ್ಷಣೆಯನ್ನು ವಾಸ್ತವಿಕ ಯುದ್ಧದ ಮೂಲಕ ಒದಗಿಸುವುದನ್ನು ಹೂರತುಪಡಿಸಿ ಜನರಿಗೆ ಹಾಗೂ ಆಸ್ತಿ-ಪಾಸ್ತಿಗಳಿಗೆ, ಭಾರತದಲ್ಲಿರುವ ವಸ್ತುಗಳಿಗೆ ಮತ್ತು ಯಾವುದೇ ಪ್ರಾಂತ್ಯದ ಭಾಗಗಳಿಗೆ ಆಕ್ರಮಣಗಳಿಂದ ಅಂದರೆ, ಬಾಹ್ಯಕಾಶ ಭೂಮಿ ಹಾಗೂ ಸಮುದ್ರ ದಾಳಿಯಿಂದ ಇತರ ಸಂರಕ್ಷಣಾ ಕಾರ್ಯ ಚಟುವಟಿಕೆಗಳಲ್ಲಿ ದಾಳಿ ವೇಳೆ ಹಾಗೂ ನಂತರದ ಸಮಯಗಳಲ್ಲಿ ತೊಡಗಿಸಬಹುದಾಗಿರುತ್ತದೆ.

4. ಪೌರರಕ್ಷಣಾ ನಿಯಮಗಳನ್ನು ರಚಿಸುವ ಅಧಿಕಾರ :- ಕೇಂದ್ರ ಸರ್ಕಾರಕ್ಕೆ ಪೌರರಕ್ಷಣೆ ಮತ್ತು ಅದಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸುವುದಕ್ಕೆ ಅಧಿನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ.

5. ಪೌರರಕ್ಷಣಾ ದಳ:- ರಾಜ್ಯ ಸರ್ಕಾರದವು ವ್ಯಕ್ತಿಗಳ ಸಮೂಹದ ಒಂದು ಸಂಸ್ಥೆಯನ್ನು ಪೌರರಕ್ಷಣಾ ದಳ ಎಂಬ ಹೆಸರಿನಲ್ಲಿ ರಚಿಸಲು ಮತ್ತು ಈ ದಳಕ್ಕೆ ಜಿಲ್ಲಾ ದಂಡಾಧಿಕಾರಿಯ ಶ್ರೇಣಿಗಿಂತ ಕಡಿಮೆ ಇಲ್ಲದ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯನ್ನು ನೇಮಕ ಮಾಡುವ ಅಧಿಕಾರವನ್ನು ಹೊಂದಿರುತ್ತದೆ.

6. ಇದು ರಾಜ್ಯ ಸರ್ಕಾರವು ಈ ಪೌರರಕ್ಷಣಾ ನಿಯಂತ್ರಕರನ್ನು ಮತ್ತು ಸದಸ್ಯರನ್ನು ನೇಮಕ ಮಾಡುವ ಹಾಗೂ ವಜಾ ಮಾಡುವ ಅಧಿಕಾರ ನೀಡುತ್ತದೆ.

7. ಇದು ಮೇಲ್ಮನವಿಯ ವಿಷಯದ ಬಗ್ಗೆಯೂ ಅವಕಾಶ ಮಾಡಿಕೊಡುತ್ತದೆ.

ಪೌರರಕ್ಷಣಾ ನಿಯಮಗಳು – 1968 :-

ಪೌರರಕ್ಷಣಾ ನಿಯಮಗಳು 1968, ಈ ಕೆಳಕಂಡ ಕಾರ್ಯಚರಣೆಗಳನ್ನು ಪೌರರಕ್ಷಣಾ ಸ್ವಯಂಸೇವಕರು ಕರ್ತವ್ಯ ನಿರ್ವಹಣಾ ಸಮಯದಲ್ಲಿ ಜಾರಿಗೊಳಿಸಬೇಕಾಗುತ್ತದೆ.

1. ಬೆಳಕುಗಳ ನಿಯಂತ್ರಣೆ.

2. ಬೆಂಕಿ ಉದ್ಭವವಾಗದಂತೆ ಮತ್ತು ಹರಡದಂತೆ ಕ್ರಮಗಳನ್ನು ತೆಗೆದುಕೊಳ್ಳುವುದು.

3. ಕೃತ್ರಿಮಾಚ್ಛದನೆ.

4. ಅಪಾಯಕರ ವಸ್ತುಗಳನ್ನು ದೂರದಲ್ಲಿಡುವ ವ್ಯವಸ್ಥೆ ಮಾಡುವುದು.

5. ಗಾಯಗೊಂಡವರನ್ನು ಸಂರಕ್ಷಿಸಿ ಸ್ಥಳಾಂತರಿಸುವುದು.

6. ಸಂರಕ್ಷಿಸಿದವರಿಗೆ ವಸತಿ.

7. ಮಾಹಿತಿಗಳ ನಿರ್ವಹಣೆ.

8. ಅಪಾಯಕಾರಿ ಪಶುಗಳ ವಧೆ ಮಾಡುವುದಕ್ಕೆ ಅನುಮತಿ.

9. ನೀರು ಸರಬರಾಜು ನಿರ್ವಹಣೆ.

10. ಸ್ಥಳೀಯ ಅಧಿಕಾರಿಗಳು ಮುಂಜಾಗೃತ ಕ್ರಮಕೈಗೊಳ್ಳಲು ಅಧಿಕಾರ.

11. ಪ್ರಧಾನ ರೇವುಗಳ ಮತ್ತು ಪರಿಸರ ಸಂರಕ್ಷಣೆ.

12. ಕಾರ್ಖಾನೆಗಳು ಹಾಗೂ ಗಣಿಗಳ ಸಂರಕ್ಷಣೆ.

13. ದಾಳಿಗಳಿಗೆ ಮುಂಜಾಗೃತ ಕ್ರಮಗಳು.

14. ಅಗ್ನಿ ದುರಂತದ ಸ್ಥಳಗಳ ಪರಿಶೋಧನೆ.

15. ಸ್ಥಳಗಳಲ್ಲಿ ಸುರಕ್ಷತೆ ಕ್ರಮಗಳು.

16. ಖಾಯಿಲೆಗಳು ಹರಡುವುದನ್ನು ನಿಯಂತ್ರಿಸುವುದು.

17. ವಿಮಾನ ದಾಳಿ ಆಶ್ರಯಗಳು.

18. ಪೌರರಕ್ಷಣೆ ಪೂರ್ವಬಾವಿ ಅಭ್ಯಾಸಗಳು. ​

 

ಇತ್ತೀಚಿನ ನವೀಕರಣ​ : 16-06-2020 01:19 PM ಅನುಮೋದಕರು: Approver HGCD


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಗೃಹರಕ್ಷಕ ಮತ್ತು ಪೌರರಕ್ಷಣಾ ನಿರ್ದೇಶನಾಲಯ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080